‘ಪಾತರಗಿತ್ತಿ’ ಮಾತಿನ ಮನೆಗೆ

  • IndiaGlitz, [Wednesday,December 25 2013]

‘ಪಾತರಗಿತ್ತಿ’ ಸಿನೆಮಾ 37 ದಿವಸಗಳಲ್ಲಿ ಮಾತಿನ ಭಾಗದ ಚಿತ್ರೀಕರಣ ಮುಗಿಸಿದ್ದು ಆ ಮಾತಿನ ಭಾಗಕ್ಕೆ ಮಾತುಗಳ ಜೋಡಣೆ ಶುರು ವಾಗಿದೆ. ಸಿನಿ ಸ್ಟಾಲ್ ಅವರ ಪ್ರಥಮ ಕಾಣಿಕೆ ಕೆ ಈಶ್ವರಪ್ಪ ಅವರು (ನಿರ್ದೇಶಕ ಕೆ ಈಶ್ವರ್) ನಿರ್ಮಾಪಕರು. ಮಂಜುನಾಥ್ ಈ ಚಿತ್ರದ ಸಹ ನಿರ್ಮಾಪಕರು. ಪಾತರಗಿತ್ತಿ ಚಿತ್ರದ ಕಥೆ,ಚಿತ್ರಕಥೆ, ಸಂಭಾಷಣೆ ನಿರ್ದೇಶನ ಕೆ ಈಶ್ವರ್ ಅವರದು.

ಹೆಣ್ಣಿನ ಮನಸ್ಸು ಚಂಚಲ. ಚಿಟ್ಟೆಯಂತೆ ಹಾರಾಡುತ್ತಲೆ ಇರುತ್ತದೆ ಎಂದು ಸೂಚ್ಯವಾಗಿ ನಿರ್ದೇಶಕರು ಹೇಳಲಿದ್ದಾರೆ.‘ಪಾತರಗಿತ್ತಿ’ ಚಿತ್ರಕ್ಕೆ ಸಂಗೀತವನ್ನು ವೆಂಕಟಸ್ವಾಮಿ ಅವರು ಬಹುತೇಕ ಪೂರೈಸಿ ಅಸುನೀಗಿದರು, ಅವರ ಕೆಲಸವನ್ನು ಸಮೀರ ಕುಲಕರ್ಣಿ ಅವರು ಮಾಡಲಿದ್ದಾರೆ.

ರಾಕೇಶ್ ಸಿ ತಿಲಕ್ ಈ ಚಿತ್ರದ ಛಾಯಾಗ್ರಾಹಕರು. ನಾಯಕನಾಗಿ ಶ್ರೀಕಿ, ನಾಯಕಿ ಆಗಿ ಪ್ರಜ್ಜು ಪೂವಯ್ಯ ಇದ್ದಾರೆ. ತಬಲಾ ನಾಣಿ, ಲಕ್ಕಿ ಶಂಕರ್,ರಾಜು ತಾಳಿಕೋಟೆ, ಲಯೆನ್ದ್ರ, ಮಿತ್ರ, ಬುಲ್ಲೆಟ್ ಪ್ರಕಾಷ್,ಪೊತ್ರೆ ನಾಗರಾಜ್,ಬ್ರಹ್ಮವರ್, ಶಾಂತಮ್ಮ, ಚಿಕ್ಕಣ್ಣ, ಕುರಿ ಪ್ರತಾಪ್, ರಾಮನಯಕ್, ನೀಲಕಂತಸ್ವಾಮಿ ಪೋಷಕ ಪಾತ್ರಗಳಲ್ಲಿ ಇದ್ದಾರೆ. ಶಕೀಲಾ ಒಂದು ಹಾಡಿಗೆ ಬಂದು ಕುಣಿದು ಕುಪ್ಪಳಿಸಿದ್ದಾರೆ.

ಗಣೇಶ್ ಎಂ ಅವರ ಸಂಕಲನ, ಮದನ್ ಹರಿಣಿ, ಸದಾ ರಾಘವ್, ಮಾಲೂರ್ ಶ್ರೀನಿವಾಸ್ ಅವರ ನೃತ್ಯ ನಿರ್ದೇಶನ, ಮಾಸ್ ಮಾಧ ಅವರ ಸಾಹಸ, ಕೆ ವಿ ರಾವ್ ಅವರ ಕಲೆ ಈ ಚಿತ್ರಕ್ಕಿದೆ.